Posts

ಊರುಗೋಲು..

  ಹುಟ್ಟಿದ ಜೀವಕ್ಕೆ ಎದ್ದು ನಿಂತು ನಡೆಯಲು ಬೇಕು... ಪರಮಾತ್ಮನ ಕೃಪೆ. ಜೀವನದುದ್ದಕ್ಕೂ ಬೇಕು, ಕೈ ಹಿಡಿದು ನಡೆಸಲು ಭಗವಂತನೆಂಬ ಊರುಗೋಲು. ಆದರೂ, ನಮ್ಮ ಕೋರಿಕೆ ಒಂದೇ ಇರಲಿ ಭಗವಂತನಲ್ಲಿ......  ಮುಪ್ಪಿನಲಿ ಕರುಣಿಸದಿರು "ಊರುಗೋಲು" ಹಿಡಿದು ನಡೆಯುವ ಭಾಗ್ಯ..  ಬದಲಿಗೆ ಕೈ ಹಿಡಿದು ಕರೆದುಕೊಂಡು ಹೋಗು ನಿನ್ನೊಡನೆ, ನಿನ್ನ ಮನೆಗೆ..

ಆಸೆಗಳು

 ನಮ್ಮ ಆಸೆಗಳು ನಮ್ಮನ್ನು  ಆಳುವಂತಾಗಬಾರದು. ಆಸೆಗಳು ಮೈಗೆ ಮೆತ್ತಿ ಕೊಳೆತು ಜೀವನ ನಾಶವಾಗಬಾರದು...!!!  ಅಸೆಗಳು ಜೀವಿಗಳ ಜೀವನದಲ್ಲಿ ಸಹಜ. ಅದು ಹಿಮದ ಮೇಲೆ ಜಾರಿದಂತೆ , ಸುಂದರವಾಗಿ, ಮೈಗೆ ಅಂಟದೇ ಜಾರುತ್ತಿರಬೇಕು. ಆಸೆ ಜೀವಕ್ಕೆ ಅಂಟದೇ, ಜೀವನದಲ್ಲಿ ಅನುಭವಿಸಿ, ದಿನ ಕಳೆಯುವಂತಿರಬೇಕು...!!!  ಆಸೆಯೂ ಇರಬೇಕು, ಇತಿ ಮಿತಿಯಲಿ. ಅದೇ ಜೀವನವಲ್ಲ. ಜೀವನದ ದಾರಿಯಲ್ಲಿ, ಕ್ಷಣಿಕ ಆಸ್ವಾದನೆಯಷ್ಟೆ ...!!! 

ದೇವನ ಪಗಡೆಯಾಟ

  ನಾವೆಲ್ಲ ಇಂದು ಹುಟ್ಟಿ... ನಾಳೆ ಎನ್ನುವ ದಿನ ಇಲ್ಲಿಯೇ ಸಾಯುವ ಯಕಶ್ಚಿತ್ ಪ್ರಾಣಿಗಳು. ನಾವೆಲ್ಲರೂ ದೇವನ ಪಗಡೆಯಾಟದ ಭಾಗ. ಆಟಗಾರ ಆಟವಾಡುವಾಗ  ರಾಜನೋ, ಕಾಲಾಳೋ,ಕುದುರೆ ಎಂದು ಚೆಸ್ ಬೋರ್ಡ್ ಮೇಲಿರಿಸಿ ಸಂಭೃಮಿಸುವುದು ಸತ್ಯವೇ...ಆದರೆ ಅದು ಆಟಗಾರನ ಕ್ಷಣಿಕ ಆಟದ ಭಾಗವಷ್ಟೆ. ಒಮ್ಮೆ ಆಟ ಮುಗಿಯುತ್ತಿದ್ದಂತೆ ಆಟಗಾರ, ರಾಜ ಕಾಲಾಳುಗಳನ್ನೆಲ್ಲಾ , ಒಂದೇ ಡಬ್ಬದಲ್ಲಿ ಸೇರಿಸುತ್ತಾನೆ ಸಮಾನ ಬೆಲೆಯ ನೆಲೆಯಲ್ಲಿ.

ಸತ್ಯ..

 ಸತ್ಯ ಮುಚ್ಚಿಟ್ಟಸ್ಟೂ ಮಂಕಾಗುತ್ತದೆ. ಮಿಥ್ಯೆ ಹೊರಗಡೆದಷ್ಟೂ ಶುದ್ಧವಾಗುತ್ತದೆ. ಸತ್ಯ ಒಪ್ಪದ ಮನಸ್ಸು, ಕ್ಷೋಭೆಯಿಂದ ಬಡಬಡಿಸುತ್ತವೆ,ಅರೆ ಬೆಂದ ಅನ್ನ ತಿಂದು, ಗಂಟಲಲ್ಲಿ ಸಿಕ್ಕಿ ಒದ್ದಾಡಿದಂತೆ. ಸತ್ಯ ಒಪ್ಪುವುದು ಅಷ್ಟು ಸುಲಭವಲ್ಲ. ಸತ್ಯ ಅರಗಿಸಲು ಕಷ್ಟ, ಮಥಿಸಿ ಮನನ ಮಾಡಲು ಸಾವಧಾನ ಬೇಕು...ಮನಸ್ಸಿಗೆ ನೆಮ್ಮದಿ ಬೇಕು. ಸತ್ಯ ಸಾಯದು,...ಅರಗಿಸಲಾಗದ ಅತೃಪ್ತ ಆತ್ಮಗಳ ಬಡಬಡಿಕೆಗೆ  ಸತ್ಯ ನಾಶವಾಗದು..ಸತ್ಯವನ್ನು ಸಂಶೋಧಿಸಿ, ಸದಾ ಅರಗಿಸಿಕೊಳ್ಳುವ ಪ್ರತಿಭೆ ಮತ್ತಷ್ಟು ಬೆಳೆಯುತ್ತದೆ......

ಸೊನ್ನೆಯಿಂದ ಜೀವನ

 ನಿಮ್ಮ ಜೀವನ ಆರಂಭವಾಗುವುದು ಸೊನ್ನೆಯಿಂದ. ಜೀವನದಲ್ಲಿ ಸಿಗುವ ಪ್ರತಿಯೊಬ್ಬರ ಹಿಂದೆ ನೀನು ನೀನಿದ್ದರೆ, ಅವರು ನಿನ್ನ ಮುಂದಿದ್ದು ನಿನ್ನ ಮೌಲ್ಯವೇರುತ್ತಾ ಹೋಗುತ್ತದೆ. ಜೀವನದಲ್ಲಿ ಕೆಲವೊಮ್ಮೆ ಸೊನ್ನೆ ಮೌಲ್ಯದ ವ್ಯಕ್ತಿಗಳೂ ಸಿಗುತ್ತಾರೆ.ಅವರನ್ನೂ ನಿನ್ನ ಮುಂದೆ ಇಡು. ಅದರಿಂದ ನಿನ್ನ ಮೌಲ್ಯ ಕಡಿಮೆಯಾಗದು...ನಿನ್ನ ವರ್ಧನೆಗೆ ಅದು ಸಹಾಯಕವಾಗುವುದಂತೂ ಸತ್ಯ. Be zero, add on friends irrespective of their value. Feel you are least, so your value will continuously add on.

"ಕರ್ಮ" ಭೂಮಿ ಭಾರತ

  ಅಖಂಡ ಭಾರತವು ಒಂದು "ಕರ್ಮ" ಭೂಮಿ. ಇಲ್ಲಿನ ಮಣ್ಣಿನ ಮೂಲ ಬೇರು "ಹಿಂದೂ" ಧರ್ಮವೆಂಬ ಕರ್ಮ ಆಧರಿದ ಜೀವನ ಕ್ರಮ. ಈ ಜೀವನ ಪದ್ಧತಿಯಲ್ಲಿ ,"ಜಾತಿ-caste" ಎಂಬ ಪದವೇ ಇಲ್ಲ.ಎಲ್ಲರೂ ಸಮಾನರು,ಆದರೆ ಅವರು ಅನುಸರಿಸುವ ಕರ್ಮ/ಕಾರ್ಯಗಳಿಂದ ನಾಲ್ಕು ವಿಭಾಗದಲ್ಲಿ ಗುರುತಿಸಲ್ಪಡುತ್ತಿದ್ದರು.ಅವುಗಳನ್ನು ವರ್ಣಗಳೆಂದು ಗುರುತಿ ಸಲ್ಪಡುತ್ತಿತ್ತು.ಎಲ್ಲವೂ ಮುಕ್ತಿಗಾಗಿ, ದೇವರ ಅನುಗ್ರಹಕ್ಕಾಗಿ ಆರಿಸಿಕೊಂಡ ಗೌರವಯುತ  ಮಾರ್ಗಗಳಾಗಿದ್ದವು. "ವಸುದೈವ ಕುಟುಂಬ"ವೆಂಬ ಪರಿಕಲ್ಪನೆ ಇತ್ತು.ಯಾರೂ ಯಾವ ಸಮಯದಲ್ಲಿಯೂ ತನ್ನ ಆಯ್ಕೆಯ "ಕರ್ಮ"ದಲ್ಲಿ ಮುಂದುವರಿಯುವ ಮುಕ್ತತೆ ಇತ್ತು. ಆದರೆ ಯಾವಾಗ ಬ್ರಿಟಿಷರು, ಪೋರ್ಚುಗೀಸರು ಈ ನೆಲದಲ್ಲಿ ಕಾಲಿಟ್ಟರೋ, ಅವರು ತಮ್ಮ ಲಾಭಕ್ಕಾಗಿ, ವರ್ಣ ವ್ಯವಸ್ಥೆಯನ್ನು ತಿರುಚಿ, ಅವರ ಅನುಕೂಲಕ್ಕಾಗಿ ಜಾತಿ ವ್ಯವಸ್ಥೆಯೆಂಬಂತೆ ನಿಧಾನವಾಗಿ ಮಾರ್ಪಡಿಸಿದರು. ಮೇಲ್ವರ್ಗ ,ಕೆಳವರ್ಗವನ್ನು ಸೃಷ್ಟಿಸಿ ಅದನ್ನು ಜಾತಿ ಹೆಸರಲ್ಲಿ ಶ್ರೇಣೀಕೃತಗೊಳಿಸಿದರು. "Casta" ಎನ್ನುವ ಪೋರ್ಚುಗೀಸರ "ರಕ್ತ ಸಂಬಂಧ" ಎನ್ನುವ ಪದವನ್ನು, ಜಾತಿಯ ವ್ಯವಸ್ಥೆಯ ಅರ್ಥದಲ್ಲಿ ರೂಪಾಂತರಗೊಳಿಸಿ, ನಮ್ಮ ಜನರಲ್ಲಿ ಭೇದ ,ದ್ವೇಷದ ಕಂದಕ ಸೃಷ್ಟಿಸಿ ತಮ್ಮ ಪಿತೂರಿಯ ಭಾಗವಾಗಿಸುವಲ್ಲಿ ಸಫಲತೆ ಕಂಡರು. ಇದರ ಭಾಗವಾಗಿ, ಆಗಿನ ಕೆಲವು ಮುಂದುವರಿದ ಜನಾಂಗದ ಜನರನ್ನೆ ಆಯ್ದು, ಅವರ ...

ಮೌನದ ತೊಳಲಾಟ

 ನನ್ನತನದ ಲಾಲಸೆ,ಪ್ರಾಪಂಚಿಕ ಸ್ವಾರ್ಥವೆನಿಸಿದರೆ...ಸತ್ಯ. ಪ್ರತಿಯೊಂದು ಆತ್ಮವೂ ತನ್ನ ಅಸ್ತಿತ್ವಕ್ಕಾಗಿ ನಡೆಸುವ ನಿರಂತರ ಹೋರಾಟವೇ "ಜೀವನ". ಜೀವನವೆನ್ನುವುದು, "ಆತ್ಮ" ಮತ್ತು ಭೌತಿಕ "ದೇಹ"ದ ಕೂಡು ನಡೆ. ಅಂದರೆ ದೇವನೊಲುಮೆಯ ದೇಹ, ಆತ್ಮಗಳೆ ಮುಖ್ಯ ಮತ್ತು ಪೂರ್ವ ನಿರ್ಧರಿತ ಎಂದಿರುವಾಗ.. ಮತ್ತೇಕೆ ಬವಣೆ?  ಮನಸ್ಸಿನಾಣತಿಯಂತೆ ನಡೆ, ಪ್ರತಿಫಲದ ನಿರೀಕ್ಷೆ ಬಿಟ್ಟು. ಬೇರೆ ಆತ್ಮಗಳ ನಡುವೆ ಸ್ಪಂದಿನೆಯಿರಲಿ, ಆದರೆ ಬೇರೆ ಆತ್ಮಗಳ ಮೇಲಿನ ವ್ಯಾಮೋಹ ನಮ್ಮೆಲ್ಲಾ ದುಃಖದ ಮೂಲ. ಆತ್ಮ ಪರಮಾತ್ಮನ ಅಂಶವಾಗಿರುವಾಗ,ದೇವನೇ ಆ ಆತ್ಮಗಳ ನಿರ್ಧೇಶನ ಮಾಡುತ್ತಿರುವಾಗ, ನಿನ್ನಿಂದ ಏನಾದೀತು ಇತರರ ಆತ್ಮೋದ್ಧಾರ? ೨)ಅಂತರಂಗದ ಮಂಥನದ ಉತ್ಪತ್ತಿ "ಮೌನ" ವಾದರೆ, ಜೀವನದ ಭವಿಷ್ಯದ ನಡೆಯ, ದಾರಿ ಹುಡುಕುವ ಕ್ಷಮತೆ ವೃದ್ಧಿಸೀತು. ಮೌನದ ತೊಳಲಾಟವೇ, ಉಕ್ಕಿ ಆಂತರ್ಯದ ಬೇಗೆ,ಮನಸ್ಸಾಗರದ ದೈತ್ಯ ಅಲೆಗಳ ಉಗಮದ ಜ್ವಾಲಾಮುಖಿಯಾದರೆ, ಎಲ್ಲವೂ ಪ್ರಯಳ ನಾಶದ ಹಾದಿ.