ಅಖಂಡ ಭಾರತವು ಒಂದು "ಕರ್ಮ" ಭೂಮಿ. ಇಲ್ಲಿನ ಮಣ್ಣಿನ ಮೂಲ ಬೇರು "ಹಿಂದೂ" ಧರ್ಮವೆಂಬ ಕರ್ಮ ಆಧರಿದ ಜೀವನ ಕ್ರಮ. ಈ ಜೀವನ ಪದ್ಧತಿಯಲ್ಲಿ ,"ಜಾತಿ-caste" ಎಂಬ ಪದವೇ ಇಲ್ಲ.ಎಲ್ಲರೂ ಸಮಾನರು,ಆದರೆ ಅವರು ಅನುಸರಿಸುವ ಕರ್ಮ/ಕಾರ್ಯಗಳಿಂದ ನಾಲ್ಕು ವಿಭಾಗದಲ್ಲಿ ಗುರುತಿಸಲ್ಪಡುತ್ತಿದ್ದರು.ಅವುಗಳನ್ನು ವರ್ಣಗಳೆಂದು ಗುರುತಿ ಸಲ್ಪಡುತ್ತಿತ್ತು.ಎಲ್ಲವೂ ಮುಕ್ತಿಗಾಗಿ, ದೇವರ ಅನುಗ್ರಹಕ್ಕಾಗಿ ಆರಿಸಿಕೊಂಡ ಗೌರವಯುತ ಮಾರ್ಗಗಳಾಗಿದ್ದವು. "ವಸುದೈವ ಕುಟುಂಬ"ವೆಂಬ ಪರಿಕಲ್ಪನೆ ಇತ್ತು.ಯಾರೂ ಯಾವ ಸಮಯದಲ್ಲಿಯೂ ತನ್ನ ಆಯ್ಕೆಯ "ಕರ್ಮ"ದಲ್ಲಿ ಮುಂದುವರಿಯುವ ಮುಕ್ತತೆ ಇತ್ತು. ಆದರೆ ಯಾವಾಗ ಬ್ರಿಟಿಷರು, ಪೋರ್ಚುಗೀಸರು ಈ ನೆಲದಲ್ಲಿ ಕಾಲಿಟ್ಟರೋ, ಅವರು ತಮ್ಮ ಲಾಭಕ್ಕಾಗಿ, ವರ್ಣ ವ್ಯವಸ್ಥೆಯನ್ನು ತಿರುಚಿ, ಅವರ ಅನುಕೂಲಕ್ಕಾಗಿ ಜಾತಿ ವ್ಯವಸ್ಥೆಯೆಂಬಂತೆ ನಿಧಾನವಾಗಿ ಮಾರ್ಪಡಿಸಿದರು. ಮೇಲ್ವರ್ಗ ,ಕೆಳವರ್ಗವನ್ನು ಸೃಷ್ಟಿಸಿ ಅದನ್ನು ಜಾತಿ ಹೆಸರಲ್ಲಿ ಶ್ರೇಣೀಕೃತಗೊಳಿಸಿದರು. "Casta" ಎನ್ನುವ ಪೋರ್ಚುಗೀಸರ "ರಕ್ತ ಸಂಬಂಧ" ಎನ್ನುವ ಪದವನ್ನು, ಜಾತಿಯ ವ್ಯವಸ್ಥೆಯ ಅರ್ಥದಲ್ಲಿ ರೂಪಾಂತರಗೊಳಿಸಿ, ನಮ್ಮ ಜನರಲ್ಲಿ ಭೇದ ,ದ್ವೇಷದ ಕಂದಕ ಸೃಷ್ಟಿಸಿ ತಮ್ಮ ಪಿತೂರಿಯ ಭಾಗವಾಗಿಸುವಲ್ಲಿ ಸಫಲತೆ ಕಂಡರು. ಇದರ ಭಾಗವಾಗಿ, ಆಗಿನ ಕೆಲವು ಮುಂದುವರಿದ ಜನಾಂಗದ ಜನರನ್ನೆ ಆಯ್ದು, ಅವರ ...