ನಂಬಿಕೆಯೇ ಇಂಬು ..
ಹೃದಯ ಉರಿ ಹೊತ್ತು ಕರಟಿ ಕಣ್ಣೀರಿಳಿದಾಗ,.
.
.
ತಂಗಾಳಿ ಬೀಸಿ,ಬಿಸಿ ಮನಸ್ಸು ತಂಪಾಗಿಸಿತಲ್ಲ.
ತುಂತುರು ಹನಿ ಮಳೆ, ಕಣ್ಣೀರ ತೊಯ್ದು ಮರೆಮಾಚಿತಲ್ಲ.
ಪಲ್ಲವಿಸಿದ ಪುಷ್ಪ ಸುವಾಸನೆ, ಕರಟಿದ ಹೃದಯದ ವಾಸನೆಯ ಕರಗಿಸಿತಲ್ಲ.
ಮತ್ತೆ ಯಾರು ದೇವನಿಲ್ಲವೆಂದು ಕನವರಿಪರು.
ಮೂಢನಾಗದಿರು, ನಂಬಿಕೆಯೇ ಇಂಬು ಕೊಡುವುದು ಬಾಳ ಹಾದಿಯಲಿ.
Comments
Post a Comment